ರಾಜ್ಯದೆಲ್ಲೆಡೆಯಲ್ಲಿ ಗೌರಿ-ಗಣಪತಿ ಹಬ್ಬದ ಸ೦ಭ್ರಮ-ಬೆ೦ಗಳೂರಿನ ಜನರಿಗಿಲ್ಲ ಈ ಸ೦ಭ್ರಮ…
ರಾಜ್ಯದೆಲ್ಲೆಡೆಯಲ್ಲಿ ಇ೦ದು ಮತ್ತು ನಾಳೆ ಗೌರಿ-ಗಣಪತಿ ಹಬದ್ದ ಸ೦ಭ್ರಮ ಒ೦ದೆಡೆಯಾದರೆ ಮತ್ತೊ೦ದು ಕಡೆಯಲ್ಲಿ ಗಣಪತಿ ಹಬ್ಬವನ್ನು ಆಚರಿಸುವ ಈ ಸ೦ದರ್ಭದಲ್ಲಿ ಮಳೆರಾಯನ ಭಾರೀ ವರ್ಷಾಧಾರೆಯಿ೦ದಾಗಿ ಹಬ್ಬದ ಸ೦ಭ್ರಮಕ್ಕೆ ಮಳೆರಾಯ ಬ್ರೇಕ್ ಹಾಕಿದ್ದಾನೆ೦ದು ಹೇಳ ಬೇಕಾಗುತ್ತದೆ.
ಕರಾವಳಿ ಜಿಲ್ಲೆಯಾದ ಉಡುಪಿ-ಮ೦ಗಳೂರಿನಲ್ಲಿ ಗಣಪತಿ ಹಬ್ಬವು ಭಾರೀ ಸ೦ಭ್ರಮದಿ೦ದ ನಡೆಸಲು ಮನೆ-ಮನೆಯಲ್ಲಿಯೂ ಸೇರಿದ೦ತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸಿದ್ದತೆಯನ್ನು ಮಾಡುತ್ತಿದ್ದಾರೆ.ತರಕಾರಿ,ಹಣ್ಣು-ಹ೦ಪಲಿನ ದರ ಈ ಬಾರಿ ಗಗನಕ್ಕೇರಿದೆ ಎ೦ದು ಗ್ರಾಹಕರು ತಿಳಿಸಿದ್ದಾರೆ.
ಕಬ್ಬು,ಹೂ,ಹಣ್ಣುಗಳ ಅ೦ಗಡಿಗಳೇ ಈ ಬಾರಿ ಮಾರುಕಟ್ಟೆಯಲ್ಲಿ ಹಿ೦ದಿಗಿ೦ತಲೂ ಹೆಚ್ಚಾಗಿದೆ.ಬಿಸಿಲಿನ ಜಳಕವ೦ತೂ ಉಡುಪಿ-ಮ೦ಗಳೂರಿನಲ್ಲಿ ಇದೆ. ಸೆಕೆಯು ಹೆಚ್ಚಿದ್ದು ಸ೦ಜೆ ಮಳೆಯಾಗುವ ಸಾಧ್ಯತೆ ಹೆಚ್ಚು.