Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಬಲೂನ್‌ಗೆ ಗಾಳಿ ತುಂಬುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಮಗು ಮೃತ್ಯು

ನಾಗ್ಪುರ:ಆ 28.ಅಜ್ಜ ಖರೀದಿಸುತ್ತಿದ್ದ ಬಲೂನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಕೃಷಿ ಚಟುವಟಿಕೆ, ಎತ್ತುಗಳ ಮಹತ್ವ ತಿಳಿಸಲು ಆಚರಿಸಲಾದ ತನ್ಹಾ ಪೋಲಾ ಹಬ್ಬಕ್ಕೆ ಮಗು ತನ್ನ ಅಜ್ಜನೊಂದಿಗೆ ಹೋಗಿದ್ದು, ಈ ವೇಳೆ ಬಲೂನ್ ಖರೀದಿಸುತ್ತಿದ್ದಾಗ ಗಾಳಿ ತುಂಬಲು ಬಳಸುವ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್‌ನ ಒಂದು ಭಾಗ ಆಕೆಯ ಕಾಲಿಗೆ ತಗುಲಿದ್ದರಿಂದ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಇನ್ನು ಈ ಬಗ್ಗೆ ಅಚಲಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment