ಹರಕೆ ಚಂಡಿಕಾಯಾಗ ಶ್ರೀ ದೇವಿಯ ಕಲಶ ಅಲಂಕಾರ ವಿನಿಯೋಗಕ್ಕಾಗಿ ಚಿನ್ನ ಆಭರಣ ಸಹಿತ ನೂತನ ರಜತ ಮುಖ ಸಮರ್ಪಣೆ
ಉಡುಪಿ:ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಸದಾ ಜರಗುವ ಹರಕೆ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಯಾಗಶಾಲೆಯ ಶ್ರೀ ದೇವಿಯ ಕಲಶ ಅಲಂಕಾರ ವಿನಿಯೋಗಕ್ಕಾಗಿ ಚಿನ್ನ ಆಭರಣ ಸಹಿತ ನೂತನ ರಜತ ಮುಖವನ್ನು ಕಾಪು ಶ್ರೀ ಗೋಕುಲದಾಸ್ ಅನಂದ್ರಾಯ್ ಶೆಣೈ & ಫ್ಯಾಮಿಲಿ ಇವರು ಸೇವಾರ್ಥವಾಗಿ ಸಮರ್ಪಿಸಿದರು.