
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ: ಇ೦ದು ಏಕಾದಶಿ ಶ್ರೀದೇವರಿಗಿ೦ದು “ವಿಠೋಬ ” ಅಲ೦ಕಾರ…
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಸೋಮವಾರ(ಇ೦ದು) ಏಕಾದಶಿ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಕಾಕಡಾರತಿಯು ಜರಗಿತು.
ಬೆಳಿಗ್ಗೆಯಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ.
ಸಪ್ತಾಹ ಮಹೋತ್ಸವದ ಅ೦ಗವಾಗಿ ಸೋಮವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ವಿಠೋಬ” ಅಲ೦ಕಾರವನ್ನು ಮಾಡಲಾಗಿದೆ. ಇ೦ದು ಏಕಾದಶಿಯ ಪ್ರಯುಕ್ತ ಭಜನಾ ಪೌಳಿಯನ್ನು ತುಳಸಿ ಮಾಲೆಯನ್ನು ಹಾಕಿ ಅಲ೦ಕಾರವನ್ನು ಮಾಡಲಾಗಿದೆ.