ಆಟವಾಡಲೆಂದು ತೆರಳಿದ 4 ವರ್ಷದ ಮಗು ನೀರಿನ ಹೊಂಡಕ್ಕೆ ಬಿದ್ದು ಮೃತ್ಯು
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ 4 ವರ್ಷದ ಮಗುವೊಂದು ಆಟವಾಡಲೆಂದು ತೆರಳಿದ್ದ ಸಮಯದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟುವಿನಲ್ಲಿ ಸಂಭವಿಸಿದೆ.
ಸಾವನ್ನಪ್ಪಿದ ಬಾಲಕ ಉಪ್ಪೂರು ನಿವಾಸಿ ನೋರ್ಮನ್ ಮತ್ತು ಸಿಲ್ವಿಯ ಎಂಬವರ ಪುತ್ರನಾಗಿರುವ ಲಾರೆನ್ ಲೂವಿಸ್ ಎಂದು ತಿಳಿಯಲಾಗಿದೆ.ಲಾರೆನ್ ಪೋಷಕರು ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು ಎನ್ನಲಾಗಿದೆ.
ಮನೆಯ ಪಕ್ಕ ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಲಾರೆನ್ ಸಾವನ್ನಪ್ಪಿದ್ದಾನೆ.ಪೋಷಕರು ಮತ್ತು ಕುಟುಂಬಿಕರು ಈ ಘಟನೆಯಿಂದ ದುಃಖದಲ್ಲಿದ್ದಾರೆ.