Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕಾಣಿಯೂರು: ಹೊಳೆಗೆ ಬಿದ್ದು ನೀರು ಪಾಲಾಗಿದ್ದ ಕಾರು ಪತ್ತೆ – ಮೃತ ದೇಹಗಳಿಗೆ ಶೋಧ ಕಾರ್ಯ

ಕಾಣಿಯೂರು:ಜು, 10.ಕಾಣಿಯೂರಿನ ಬೈತಡ್ಕದಲ್ಲಿ ಕಾರೊಂದು ಹೊಳೆಗೆ ಬಿದ್ದಿದ್ದು, ನೀರು ಪಾಲಾಗಿರುವ ಕಾರು ಇದೀಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಜು.9ರಂದು ರಾತ್ರಿ ಬೈತಡ್ಕದಲ್ಲಿ ಕಾರು ಹೊಳೆಗೆ ಬಿದ್ದಿದ್ದು, ನೀರುಪಾಲಾಗಿರುವ ಕಾರನ್ನು ಅಗ್ನಿಶಾಮಕ ದಳದವರು ಹುಡುಕಾಟ ನಡೆಸುತ್ತಿರುವಾಗ ಪತ್ತೆಯಾದ ಕಾರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಮತ್ತೆ ಕಾರು ಹೊಳೆಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಮುಂದೆ ಹೋಗಿದ್ದು, ಇದೀಗ ಕಾರನ್ನು ಮೇಲಕ್ಕೆತ್ತಲಾಗಿದೆ.

ಇನ್ನು ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರೆಂಬ ಶಂಕೆ ವ್ಯಕ್ತವಾಗಿದ್ದು, ವಿಟ್ಲ ಕುಂಡಡ್ಕ ಧನುಷ್, ಮಂಜೇಶ್ವರ ಮೂಲದ ಧನುಷ್ ಮತ್ತು ಮತ್ತೋರ್ವರು ಇದ್ದರು ಎನ್ನಲಾಗಿದೆ ಅವರ ಮೃತದೇಹ ಪತ್ತೆಯಾಗಬೇಕಿದೆ.

No Comments

Leave A Comment