
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ:ಯುವಕ-ಯುವತಿಯರಿ೦ದ ಸ್ವಚ್ಚತೆಯ ಕರಸೇವೆ…
ಉಡುಪಿ: ಭಾರೀ ಬಿಸಿಲನ ನಡುವೆಯೂ ಇಂದು ಭಾನುವಾರದಂದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಕ ಶ್ರೀದೇವಳದ ಹೊರಾ೦ಗಣದ ಸುತ್ತಲೂ ಸ್ವಚ್ಚತೆಯ ಕೈಂಕರ್ಯಕ್ಕಾಗಿ ಊರ ಸುತ್ತಲಿನ ಯುವಕ ಯುವತಿಯರ ತಂಡ, ಮಹಿಳೆಯರ ಭಜನಾ ತಂಡ ಹಾಗೂ ಎಲ್ಲ ಅನಂತ ಪದ್ಮನಾಭ ನ ಭಕ್ತರಿಂದ ಕರಸೇವೆ ಮುಂಜಾನೆಯಿಂದ ಬಹಳ ಹುಮ್ಮಸ್ಸಿನಿಂದ ಸಾಗಿತು.
ಮಾತ್ರವಲ್ಲದೇ ಇವರೊ೦ದಿಗೆ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು, ಪ್ರಧಾನಕಾರ್ಯದರ್ಶಿ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.