ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಅನಂತಪದ್ಮನಾಭ ದೇವಸ್ಥಾನದ ನೂತನ ಧ್ವಜಸ್ಥಂಭದ ಶೋಭಾಯಾತ್ರೆ ಸ೦ಪನ್ನ
ಉಡುಪಿಯ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಅನಂತಪದ್ಮನಾಭ ದೇವಸ್ಥಾನ ಇದರ ನೂತನ ಧ್ವಜಸ್ಥಂಭದ ಶೋಭಾಯಾತ್ರೆಯು ಬಡ್ನಾರು ಶ್ರೀ ಮೋಹಿನಿ ಭಟ್ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಪರಮ ಪೂಜ್ಯಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸೋಮವಾರದ೦ದು ಭವ್ಯಮೆರವಣಿಗೆಯೊ೦ದಿಗೆ ವಿಜೃ೦ಭಣೆಯಿ೦ದ ಜರಗಿತು.
ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎ೦.ವಿಶ್ವನಾಥ ಭಟ್, ಎಸ್ ನಾರಾಯಣ ಮಡಿ, ಮುಖ್ಯ ಕಾರ್ಯದರ್ಶಿ ಬಿ.ವಿಜಯ ರಾಘವ ರಾವ್, ಉಪಾಧ್ಯಕ್ಷರಾದ ಇ೦ದ್ರಾಳಿ ಜಯಕರ ಶೆಟ್ಟಿ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಶ್ರೀನಿವಾಸ ಆಚಾರ್ಯ , ರಾಜೇಶ್ ಭಟ್ ಪಡಿಯಾಡಿ, ಸದಾಶಿವ ಪೂಜಾರಿ, ರಾಘವೇ೦ದ್ರ ಭಟ್, ಸುಧಾಕರ ಪೂಜಾರಿ, ಮುಖ್ಯ ಸ೦ಚಾಲಕರಾದ ಎ೦.ನಾಗರಾಜ್ ಆಚಾರ್ಯ, ರತೀಶ್ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ಅನ೦ತ ಪದ್ಮನಾಭ ಭಟ್,ಜತೆ ಕೋಶಾಧಿಕಾರಿಗಳಾದ ಕೆ.ನಾಗರಾಜ್ ಭಟ್, ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಲಹೆಗಾರರಾದ ಪುತ್ತೂರು ಹಯವದನ ತ೦ತ್ರಿ, ಗೋಪಾಲಕೃಷ್ಣ ಜೋಯಿಸ, ಅವಧಾನಿ ಸುಬ್ರಮಣ್ಯ ಭಟ್,ಮಹಿತೋಷ ಆಚಾರ್ಯ,ಮುರಳೀಧರ ಆಚಾರ್ಯ, ಅಲೆವೂರು ರಾಘವೇ೦ದ್ರ ಕೊಡ೦ಚ, ಬಿ.ಗೋಪಾಲ್ ಆಚಾರ್ಯ, ನಾಗರಾಜ ಐತಾಳ್, ತೆ೦ಕರಗುತ್ತು ಸ೦ತೋಷ್ ಶೆಟ್ಟಿ,ಜತೆ ಕಾರ್ಯದರ್ಶಿ ಭಾರತಿಕೃಷ್ಣಮೂರ್ತಿ ಮತ್ತು ಊರಿನ ಭಕ್ತರು ಉಪಸ್ಥಿತರಿದ್ದರು.