
ಐಪಿಎಲ್ ಗುಂಗು; ರಾಷ್ಟ್ರೀಯ ತಂಡದೆಡೆಗೆ ಆಟಗಾರರ ಅನಾಸಕ್ತಿ; ಸುನಿಲ್ ಗವಾಸ್ಕರ್
ನವದೆಹಲಿ: ಭಾರತೀಯ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಕೆಲವು ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಐಪಿಎಲ್ ಗುಂಗಿನಲ್ಲಿ ಆಟಗಾರರು ದೇಶವನ್ನು ಪ್ರತಿನಿಧಿಸುವಾಗ ಶ್ರಮಿಸುವುದಿಲ್ಲ ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಒಐ ಗೆ ಬರೆದಿರುವ ಅಂಕಣದಲ್ಲಿ “ಐಪಿಎಲ್ ಹರಾಜು ಎಲ್ಲಾ ಆಟಗಾರರಿಗೂ ಜೀವನವನ್ನೇ ಬದಲಾಯಿಸುವುದಾಗಿದೆ. ಈ ಕಾರಣದಿಂದ ಐಪಿಎಲ್ ಇರುವಾಗ ದೇಶಕ್ಕಾಗಿ ಶ್ರಮಿಸಿ ಆಡದಂತೆ ಆಟಗಾರರನ್ನು ಮಾಡುತ್ತದೆ ಎಂದು ಗವಾಸ್ಕರ್ ಬರೆದಿದ್ದಾರೆ.