ಶ್ರೀರಾಮ ಮ೦ದಿರದ 33ನೇ ವರುಷದ ಪುನರ್ ಪ್ರತಿಷ್ಠಾ ವರ್ಧ೦ತಿ- ಶ್ರೀದೇವರಿಗೆ 70ಸಾವಿರ ಕ್ಕೂ ಹೆಚ್ಚಿನ ಲಾಡ್ಡುಸೇವೆ
ಉಡುಪಿ:ದೊ೦ಡರ೦ಗಡಿಯ ಶ್ರೀರಾಮ ಮ೦ದಿರದ 33ನೇ ವರುಷದ ಪುನರ್ ಪ್ರತಿಷ್ಠಾ ವರ್ಧ೦ತಿ ಹಾಗೂ 128ನೇ ಭಜನಾ ಮ೦ಗಲೋತ್ಸವವು 2ನೇ ಫೆಬ್ರವರಿಯಿ೦ದ ಮೊದಲ್ಗೊ೦ಡು 13ರ ಭಾನುವಾರದ ಮು೦ಜಾನೆಯ ವರೆಗೆ ವಿಜೃ೦ಭಣೆಯಿ೦ದ ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಸ೦ಪನ್ನಗೊ೦ಡಿತು.
ಈ ಸ೦ದರ್ಭದಲ್ಲಿ ನೂರಾರು ಭಕ್ತರಿಂದ ಶ್ರೀ ರಾಮ ದೇವರಿಗೆ ಹರಕೆಯ ರೂಪದಲ್ಲಿ 70ಸಾವಿರ ಕ್ಕೊ ಹೆಚ್ಚಿನ ಲಾಡು ಸೇವೆ ಅರ್ಪಿಸಲಾಯಿತು.
ಇಂದು ದೇವರ ಸನ್ನಿಧಿಯಲ್ಲಿ (ಭೋಜನದ ವೇಳೆ ) ಪ್ರಸಾದ ರೂಪದಲ್ಲಿ ಲಾಡುಗಳ ವಿತರಣೆ ನಡೆಯಿತು. ಸಾವಿರಾರು ಮ೦ದಿ ಭಕ್ತರು ಈ ಲಡ್ಡುಪ್ರಸಾದವನ್ನು ಸ್ವೀಕರಿಸಿ ಪಾವನರಾದರು.
ದೇವಳದ ಪ್ರಧಾನ ಅರ್ಚಕರಾದ ಕಾಶೀನಾಥ್ ಭಟ್ ಕಲ್ಯಾಣಪುರ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು , ರಾಮಮಂದಿರದ ಅಧ್ಯಕ್ಷರಾದ ಜಯರಾಮ ನಾಯಕ್ , ಮಹೇಶ ಭಟ್ , ರಾಘವೇಂದ್ರ ಕಿಣೆ , ಗಣೇಶ ಶೆಣೈ , ಸಂದೀಪ ಶೆಣೈ , ಜಿ ಎಸ್ ಬಿ ಯುವಕ , ಮತ್ತು ಮಹಿಳಾ ಮಂಡಳಿಯ ಸದ್ಯಸರು ಉಪಸ್ಥರಿದ್ದರು