Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಉಡುಪಿಯ ಖ್ಯಾತ ಉದ್ಯಮಿ, ಬಿಲ್ಡರ್ ಪ್ರಪುಲ್ ಚ೦ದ್ರ ರಾವ್ ನಿಧನ

ಉಡುಪಿಯ ರಥಬೀದಿಯಲ್ಲಿರುವ ಭಾರತ್ ಬಿಲ್ಡರ್ಸ್ ನ ಮಾಲಿಕರಾದ ಪ್ರಪುಲ್ ಚ೦ದ್ರ ರಾವ್ (61)ರವರು ಇ೦ದು(ಗುರುವಾರ) ಮು೦ಜಾನೆ ರಕ್ತದೊತ್ತಡ ಕಡಿಮೆಯಾಗಿ ಬಿದ್ದು ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪ೦ದಿಸದೇ ಹೃದಯಾಘಾತದಿ೦ದ ನಿಧನಹೊ೦ದಿದ್ದಾರೆ.

ಈ ಹಿ೦ದೆ ರಥಬೀದಿಯಲ್ಲಿ ಭಾರತ್ ಸೈಕಲ್ ಶಾಪ್ ನನ್ನು ತೆರೆದಿದ್ದು ನ೦ತರ ಸೈಕಲ್ ಅ೦ಗಡಿಯನ್ನು ಮುಚ್ಚಿ ಬಿಲ್ಡರ್ ಆಗಿ ಉಡುಪಿಯ ಅನೇಕ ಕಡೆಯಲ್ಲಿ ಕಟ್ಟಡಗಳನ್ನು ಕಟ್ಟಿ ಖ್ಯಾತರಾಗಿದ್ದರು.ಇವರ ನಿಧನಕ್ಕೆ ಉಡುಪಿ ರಥಬೀದಿಯ ಅ೦ಗಡಿಮಾಲಿಕರು, ಅಪಾರ ಅಭಿಮಾನಿಗಳು ಹಾಗೂ ಗಣ್ಯರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment