
ಶ್ರೀಲಂಕಾ: ಕಾರಾಗೃಹ ಮಾರಾಮಾರಿ ಪ್ರಕರಣ; ಮಾಜಿ ಜೈಲು ಅಧೀಕ್ಷಕಗೆ ಮರಣದಂಡನೆ ಶಿಕ್ಷೆ
ಕೊಲಂಬೊ: ವೆಲಿಕಡ ಕಾರಾಗೃಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಕೊಲಂಬೊ ಉಚ್ಚ ನ್ಯಾಯಾಲಯ ಮಾಜಿ ಜೈಲು ಅಧೀಕ್ಷಕ ಎಮಿಲ್ ರಂಜನ್ ಅವರಿಗೆ ಮರಣದಂಡನೆ ಸಜೆಯನ್ನು ವಿಧಿಸಿದೆ.
2012ರಲ್ಲಿ ವೆಲಿಕಡ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ಸಂಭವಿಸಿತ್ತು. ಈ ಗಲಭೆಯಲ್ಲಿ 27 ಮಂದಿ ಕೈದಿಗಳು ಕೊಲೆಗೀಡಾಗಿದ್ದರು. 20ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿದ್ದರು.