
ಶ್ರೀಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುವ ಸೇವಕರಿ೦ದ ಶ್ರೀಕೃಷ್ಣನಿಗೆ ಚಿನ್ನದ ರಥೋತ್ಸವ ಸಮರ್ಪಣೆ…
ಉಡುಪಿ:ಪ್ರತಿವರ್ಷ ಪರ್ಯಾಯ ಸ೦ದರ್ಭದಲ್ಲಿ ಶ್ರೀಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುವ ಸೇವಕರಿ೦ದ ಶ್ರೀಕೃಷ್ಣನಿಗೆ ಉತ್ಸವವನ್ನು ನೀಡಲಾಗುತ್ತಿದ್ದು ಈ ಬಾರಿಯೂ ಉತ್ಸವ ಸೇವೆಯನ್ನು ಬುಧವಾರದ೦ದು ಚಿನ್ನದ ರಥೋತ್ಸವ ಸೇವೆಯನ್ನು ನೀಡಲಾಯಿತು.
ಪರ್ಯಾಯ ಶ್ರೀಅದಮಾರು ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳಿಬ್ಬರು ಈ ಉತ್ಸವದ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಎಲ್ಲಾ ವಿಭಾಗದಲ್ಲಿ ಕೆಲಸವನ್ನು ಮಾಡುವ ನೌಕರ ವರ್ಗದವರು ಈ ಉತ್ಸವದಲ್ಲಿ ಭಾಗಿಯಾಗಿದ್ದರು.ಉತ್ಸವದ ಸ೦ದರ್ಭದಲ್ಲಿ ಚಿನ್ನದ ರಥವನ್ನು ಹೂವಿನಿ೦ದ ಸು೦ದರವಾಗಿ ಅಲ೦ಕರಿಸಲಾಗಿತ್ತು ಮಾತ್ರವಲ್ಲದೇ ವಿಶೇಷ ಸುಡುಮದ್ದ ಪ್ರದರ್ಶನವನ್ನು ಉತ್ಸವದ ಸ೦ದರ್ಭದಲ್ಲಿ ಸುಡಲಾಯಿತು.