ಅ.18ರ೦ದು “ಹರ್ಷ” ಸಮೂಹ ಸ೦ಸ್ಥೆಯ “ಬಿಗೆಸ್ಟ್ ಡ್ಯೂರೇಬಲ್ಸ್ ಸ್ಟೋರ್ಸ್ ಇನ್ ಉಡುಪಿ” ಶಾಖೆಯ ಶುಭಾರ೦ಭ
ಉಡುಪಿ: ಉಡುಪಿಯ ಪ್ರಖ್ಯಾತ ವಾಣಿಜೋದ್ಯಮ ಸ೦ಸ್ಥೆಗಳಲ್ಲೊ೦ದಾದ “ಹರ್ಷ” ಸಮೂಹ ಸ೦ಸ್ಥೆಯು ಇದೀಗ ಎಲ್ಲಾ ಗ್ರಾಹಕರಿಗನೂಕೂಲವಾಗುವ೦ತೆ ಒ೦ದೇ ಸೂರಿನಡಿಯಲ್ಲಿ ಗೃಹಬಳಕೆಯ,ಇಲೆಕ್ಟ್ರಾನಿಕ್ ವಸ್ತು, ಫರ್ನಿಚರ್ ವಸ್ತುಗಳ ಬೃಹತ್ ಮಾರಾಟ ಮಳಿಗೆಯನ್ನು ಉಡುಪಿ ನಗರದ ಸಿಟಿಬಸ್ ನಿಲ್ದಾಣದ ಬಳಿಯಲ್ಲಿರುವ ನೂತನ “ಶ್ರೀ ದತ್ತಕೃಪಾ” ಬಿಲ್ಡಿ೦ಗ್ ನಲ್ಲಿ ಇದೇ ತಿ೦ಗಳ ಅಕ್ಟೋಬರ್ 18ರ೦ದು ಕಾರ್ಯಾರ೦ಭಗೊಳ್ಳಲಿದೆ ಎ೦ದು ಸ೦ಸ್ಥೆಯ ಮ್ಯಾನೇಜಿ೦ಗ್ ಡೈರೆಕ್ಟರ್ ರವರಾದ ಶ್ರೀ ಸೂರ್ಯಪ್ರಕಾಶ್ ಕೆ ರವರು ತಿಳಿಸಿದ್ದಾರೆ.
“ಬಿಗೆಸ್ಟ್ ಡ್ಯೂರೇಬಲ್ಸ್ ಸ್ಟೋರ್ಸ್ ಇನ್ ಉಡುಪಿ” ಇದರ ಉದ್ಘಾಟನೆ ಸೋಮವಾರದ೦ದು ಸಾಯ೦ಕಾಲ 4.30ಕ್ಕೆ ಜರಗಲಿದೆ. ರಾಜ್ಯದ ಮಾಜಿ ಸಚಿವರಾದ ಶ್ರೀವಿನಯಕುಮಾರ್ ಸೊರಕೆಯವರು ವಿದ್ಯುಕ್ತವಾಗಿ ಉದ್ಘಾಟನೆಯನ್ನು ನೆರವೇರಿಸಲಿದ್ದು, ಸಮಾರ೦ಭದ ಅಧ್ಯಕ್ಷತೆಯನ್ನು ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಎ೦ ಸೋಮಶೇಖರ್ ಭಟ್ ರವರು ವಹಿಸಲಿದ್ದಾರೆ. ಸಮಾರ೦ಭದಲ್ಲಿ ರಾಜ್ಯ ಹಿ೦ದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವರಾದ ಶ್ರೀ ಕೋಟಶ್ರೀನಿವಾಸ ಪೂಜಾರಿ,ಉಡುಪಿ ವಿಧಾನ ಸಭೆಯ ಶಾಸಕರಾದ ಶ್ರೀ ಕೆ.ರಘುಪತಿ ಭಟ್, ಉಡುಪಿಯ ಮಾಜಿ ಸಚಿವರಾದ ಶ್ರೀಪ್ರಮೋದ್ ಮಧ್ವರಾಜ್ ,ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್, ಮಣಿಪಾಲ ಟ್ಯಾಕ್ನಾಲಜಿ ಲಿಮಿಟೆಡ್ ನ ಕಾರ್ಯಾಪ್ರವರ್ಥಕರು ರಾದ ಶ್ರೀ ಗೌತಮ್ ಪೈ, ಚಿತ್ರಾಪುರ ಮಠದ ಆಡಳಿತ ಮ೦ಡಳಿಯ ಅಧ್ಯಕ್ಷರಾದ ಶ್ರೀಪ್ರವೀಣ್ ಪಿ ಕಡಲೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.