ಪ್ರಣಬ್ ಮುಖರ್ಜಿ, ಹಜಾರಿಕಾ, ನಾನಾಜಿ ದೇಶಮುಖ್ ಗೆ ‘ಭಾರತ ರತ್ನ’ ಪ್ರದಾನ
ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಪುರಸ್ಕಾರವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.
ಅಸ್ಸಾಂನ ಸಂಗೀತ ಮಾಂತ್ರಿಕ ದಿವಂಗತ ಭೂಪೆನ್ ಹಜಾರಿಕಾ ಮತ್ತು ಸಮಾಜ ಸೇವಕ ದಿವಂಗತ ನಾನಾಜಿ ದೇಶಮುಖ್ ಅವರಿಗೆ ಮರಣೋತ್ತರವಾಗಿ ‘ಭಾರತರತ್ನ’ ನೀಡಿ ಗೌರವಿಸಲಾಯಿತು.